ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕರಾವಳಿಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ.
ಹಿಂದೆ ನಮ್ಮ ಸರ್ಕಾರ ಇದ್ದಾಗ ಶಾಲೆಗಳಲ್ಲಿ ಹಿಜಾಬ್ ಗಲಾಟೆ ಪ್ರಾರಂಭವಾಗಿತ್ತು. ವಸ್ತ್ರ ಸಂಹಿತೆ ಆಧಾರದಲ್ಲಿ ಶಾಲೆಗಳು ನಡಿಬೇಕು. ಶಾಲೆಗಳು ಮತೀಯ, ಪಂಗಡಗಳಿಂದ ಹೊರಗಿಡುವ ಸಲುವಾಗಿ ಹಿಜಾಬ್ ಚರ್ಚೆ ಬಂದಿತ್ತು. ಹಿಜಾಬ್ ಚರ್ಚೆ ಮುಂದೆ ನ್ಯಾಯಾಲಯಕ್ಕೆ ಹೋಯಿತು. ಕಾಂಗ್ರೆಸ್ ಸರ್ಕಾರದ ವೈಫಲ್ಯ ಮರೆಮಾಚಲು, ಭ್ರಷ್ಟಾಚಾರದ ಪ್ರಕರಣಗಳು ಜಾಸ್ತಿಯಾಗಿರುವುದನ್ನು ಮರೆಮಾಚಲು, ಕಾಂಗ್ರೆಸ್ ನ ಒಳಜಗಳಗಳು ಹೊರಬರಬಾರದೆಂದು ಹಿಜಾಬ್ ನ್ನು ಮುಂದಕ್ಕೆ ತರುವ ಪ್ರಯತ್ನ ಸಿ.ಎಂ ಮಾಡಿದ್ದಾರೆ ಎಂದರು. ನ್ಯಾಯಾಲಯದಲ್ಲಿ ಈ ಪ್ರಕರಣ ಇರುವಾಗ ಅದನ್ನು ತೆಗಿಬಾರದಿತ್ತು.
ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಈ ಹೇಳಿಕೆ ಸರಿಯಲ್ಲ. ಹಿಜಾಬ್ ಪ್ರಕರಣ ಶಾಲೆಗಳಲ್ಲಿ ಬಂದ್ರೆ ಕೇಸರಿಯು ಬರುತ್ತೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಗಲಭೆ, ಗಲಾಟೆ, ಗೊಂದಲ ಆಗುತ್ತೆ. ವಿದ್ಯಾರ್ಥಿಗಳ ಮಧ್ಯೆ ಭಿನ್ನಾಭಿಪ್ರಾಯಗಳು ಬರುತ್ತೆ. ಇದೊಂದು ಅಲ್ಪಸಂಖ್ಯಾತರ ಮತ ಬ್ಯಾಂಕ್ ಗಾಗಿ ತುಷ್ಟೀಕರಣ ನೀತಿಯಾಗಿದೆ. ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ಶಾಲೆಗಳಲ್ಲಿ ಮತೀಯ ಭಾವನೆ ಕೆರಳಿಸುವ ಬೇಜವಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಒಬ್ಬ ವಕೀಲರಾಗಿ ಈ ರೀತಿಯ ಹೇಳಿಕೆ ನೀಡಿರುವುದು ಅವರ ಭೌಧ್ಧಿಕ ದಿವಾಳಿತನವನ್ನು ತೋರಿಸುತ್ತೆ ಎಂದು ನಳಿನ್ ಹೇಳಿದ್ದಾರೆ.
Follow us on Social media